ವಂಚನೆ

ಜೀವನದಲ್ಲಿ ಅರ್ಥವನ್ನು ಹುಡುಕಲು
ಓಡಾಟ
ನಡೆದಿದೆ ಸತತ
ಎಷ್ಟು ಓದಿದರೂ
ಅರ್ಥ ಕಾಣದು
ಅಲ್ಲಲ್ಲಿ ನಿಂತು
ದಣಿವ ಪರಿಹರಿಸಿ
ಮುಂದುವರಿದಾಗ
ತುಸುವೆ ಲಭಿಸಿದ
ಸುಖವೂ ಅರ್ಥಹೀನ,
ಮುಂದೆ ಧುತ್ತೆಂದು
ಎದುರು ನಿಲ್ಲುವ
ಪ್ರಶ್ನೆ
ಮುಖದ ಮೇಲಿನ
ದಣಿದ ಗೆರೆಗಳ ಮರೆಸಿ
ಹಣೆ-ಗಲ್ಲಗಳ ಮೇಲಿನ
ಬೆವರುಗಳ ಒರೆಸಿ
ಕಣ್ಣಗುಳಿಯಲಿ ಕಂಡ
ಕಪ್ಪು ಸುತ್ತನು ಕಡೆಗಣಿಸಿ
ಬಾಳ ಹಾದಿಯಲಿ ನಡೆದಾಗ
ಮತ್ತೆ
ಗೋಲಾಕಾರದ ಶೂನ್ಯ
ಆಗ
ನೌಕರಿಗೋಡುವ ನಿರಂತರ
ಚಿಂತೆಯ
ಕಪ್ಪು ಮುಸುಕು ಹೊತ್ತ
ಬಸ್ಸಿಗೆ ಕಾಯುವ
ತಂಡ ತಂಡಗಳ ನಡುವೆ
ಬಸ್ಸೇರುವ ದುರ್ಬಲ ಶರೀರಗಳು
ನಡೆಸುವ ಹೋರಾಟದಲ್ಲಿ
ಯಾವ ಅರ್ಥವೂ ಹೊಳೆಯದೆ
ಹೊಳೆಗೆ ಒಗೆದ ಕಲ್ಲಿನ ಸುತ್ತು
ಸುಳಿಯೆದ್ದಂತೆ
ಆ ಸುಳಿಯು ತೇಲಿ ಹೋಗುವುದನ್ನೆ ನೋಡಿ
ಮುಖದ ಮೇಲೆದ್ದ ಅರ್ಥ ಸುಳಿಯನ್ನು
ಅರಿಯದೆ
ಅರಿತ-ಸೋಗನ್ನು ಹಾಕುತ್ತ
ತನ್ನತಾ ವಂಚಿಸುತ
ಬದುಕುವುದು
ಬದುಕೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆ ನಾನು ಈ ನಾನು
Next post ಅಂತೆ ಹೇಳಿದರೇನು ಸಾವಯವವೆಂದು?

ಸಣ್ಣ ಕತೆ

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

cheap jordans|wholesale air max|wholesale jordans|wholesale jewelry|wholesale jerseys